ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ವತಿಯಿಂದ ಕರ್ನಾಟಕದಾದ್ಯಂತ ಅಂಗವಿಕಲತೆಯುಳ್ಳ ಹಾಗೂ ಅಂಗವಿಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳಿಗೆ ಅಂಗವಿಕಲರ ಮಾಸಾಶನ ಯೋಜನೆ(Handicap Pension Scheme)ಯಲ್ಲಿ ಪ್ರತಿ ತಿಂಗಳು ನಿರ್ವಹಣಾ ಭತ್ಯೆ ನೀಡಲಾಗುತ್ತಿದೆ.
ಅಂಗವಿಕಲರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಅಂಗವಿಕಲರ ಮಾಸಾಶನ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇಕಡ 5 ರಿಂದ 6 ರಷ್ಟು ಅಂಗವಿಕಲತೆಯುಳ್ಳ ವ್ಯಕ್ತಿಗಳಿರುತ್ತಾರೆ. ಈ ಯೋಜನೆಯ ಕುರಿತಂತೆ ಅರ್ಹತಾ ಮಾನದಂಡ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಪಿಂಚಣಿ ಮೊತ್ತದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Eligibility Criteria for Handicap Pension Scheme
ಯೋಜನೆಯ ಅರ್ಹತಾ ಮಾನದಂಡ ಈ ಕೆಳಗಿನಂತಿವೆ;
• ಅಂಧತ್ವ
• ಮಂದದೃಷ್ಟಿ
• ಕುಷ್ಠರೋಗ ನಿವಾರಿತರಾದವರು
• ಶ್ರವಣದೋಷವುಳ್ಳವರು
• ಚಲನವಲನ ಅಂಗವಿಕಲತೆ
• ಬುದ್ಧಿಮಾಂದ್ಯತೆ
• ಮಾನಸಿಕ ಅಸ್ವಸ್ಥತೆ
Documents required for Handicap Pension Scheme
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು;
- ವಾಸಸ್ಥಳ ದೃಡೀಕರಣ ಪತ್ರ
- ವೈದ್ಯಕೀಯ ಪ್ರಮಾಣ ಪತ್ರ
- ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು
- ಆಧಾರ್ ಕಾರ್ಡ್
ಪಿಂಚಣಿ ಮೊತ್ತ(Handicap Pension Amount):
- ಅಂಗವಿಕಲರ ಮಾಸಾಶನ ಯೋಜನೆಯಲ್ಲಿ ಶೇಕಡಾ 40 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ ಪ್ರತಿ ತಿಂಗಳು ಫಲಾನುಭವಿಯ ಖಾತೆಗೆ 800 ರೂಗಳನ್ನು ಜಮಾ ಮಾಡಲಾಗುತ್ತದೆ.
- ಶೇಕಡಾ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ ಪ್ರತಿ ತಿಂಗಳು ಫಲಾನುಭವಿಯ ಖಾತೆಗೆ 1400 ರೂಗಳನ್ನು ಜಮಾ ಮಾಡಲಾಗುತ್ತದೆ.
- ಶೇಕಡಾ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಮನೋವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ ಪ್ರತಿ ತಿಂಗಳು ಫಲಾನುಭವಿಯ ಖಾತೆಗೆ 2000 ರೂಗಳನ್ನು ಜಮಾ ಮಾಡಲಾಗುತ್ತದೆ.
How to Apply for Disability Pension Scheme Karnataka
ಅಂಗವಿಕಲರ ಮಾಸಾಶನ ಯೋಜನೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆಫ್ ಲೈನ್ ಮೂಲಕ ವಾಸಸ್ಥಳ ವ್ಯಾಪ್ತಿಯ ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
Official Website | dssp.karnataka.gov.in |
More Updates | Karnataka Help.in |