ಪ.ಜಾತಿ/ಪ.ಪಂಗಡದ ದೇವದಾಸಿಯರ ಮಕ್ಕಳನ್ನು ವಿವಾಹವಾಗುವವರಿಗೆ ರೂ.8ಲಕ್ಷಗಳವರೆಗೆ(ಪುರುಷನಿಗೆ ರೂ.3ಲಕ್ಷ ಹಾಗೂ ಮಹಿಳೆಗೆ ರೂ.5ಲಕ್ಷದವರೆಗೆ) ಪ್ರೋತ್ಸಾಹಧನ ಒದಗಿಸಲಿದೆ. ಈ ಮೂಲಕ ದೇವದಾಸಿಯರ ಮಕ್ಕಳಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನೆರವು ನೀಡುವ ಧ್ಯೇಯ ಈ ಯೋಜನೆ ಹೊಂದಿದೆ. ಮದುವೆಯಾದ ಒಂದುವರೆ ವರ್ಷ(18 ತಿಂಗಳು)ದೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಯಾ ಇಲಾಖೆ ಅಧಿಕೃತ ಜಾಲತಾಣಗಳಾದ https://swdservices.karnataka.gov.in/ ಅಥವಾ https://twd.karnataka.gov.in/ಗೆ ಭೇಟಿ ನೀಡಿ.
ಸದರಿ ಲೇಖನದಲ್ಲಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ನಿಗದಿತ ಕೊನೆಯ ದಿನಾಂಕ ಇರುವುದಿಲ್ಲ.
ಯಾರೆಲ್ಲಾ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಅರ್ಹರು?
• ಕರ್ನಾಟಕದಲ್ಲಿ ವಾಸಿಸುವ ಪ.ಜಾತಿ/ಪ.ಪಂಗಡದ ದೇವದಾಸಿಯ ಮಕ್ಕಳ ವಿವಾಹ ದಂಪತಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. • ದಂಪತಿಗಳಿಬ್ಬರು ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು. • ದಂಪತಿಗಳು ಮದುವೆಯಾದ 18 ತಿಂಗಳೊಳಗೆ ಯೋಜನೆಗೆ ಅರ್ಜಿ ಸಲ್ಲಿಸಬೇಕು. • ದಿನಾಂಕ 01-04-2018 ರಂದು ಅಥವಾ ನಂತರ ವಿವಾಹವಾದ ದಂಪತಿಗಳು ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಅರ್ಹರು. • ದೇವದಾಸಿಯ ಕುಟುಂಬದ ವಾರ್ಷಿಕ ಆದಾಯವು ರೂ.5ಲಕ್ಷ ಮಿತಿಯೊಳಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
• ಅರ್ಜಿದಾರರ ಮಾನ್ಯವಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ • ದಂಪತಿಗಳ ಆಧಾರ್ ಕಾರ್ಡ್ • ಅರ್ಜಿದಾರರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ • ಮದುವೆ ನೋಂದಣಿ ಪ್ರಮಾಣ ಪತ್ರ • ಗಂಡ ಹೆಂಡತಿಯ ಜಂಟಿ ಅಕೌಂಟ್ ಪಾಸ್ ಬುಕ್ • ದಂಪತಿಗಳ ಮದುವೆಯ ಫೋಟೋ • ದೇವದಾಸಿ ನೋಂದಣಿ ಪ್ರಮಾಣ ಪತ್ರ
ಪ್ರೋತ್ಸಾಹಧನ ಮೊತ್ತ:
ಪ.ಜಾತಿಯ ದೇವದಾಸಿ ಮಹಿಳೆಯರ ಪುತ್ರ ಪ.ಜಾತಿ ಅಥವಾ ಇತರೆ ಬೇರೆ ಜಾತಿಯ ಯುವತಿಯನ್ನು ವಿವಾಹವಾದರೆ ರೂ.3ಲಕ್ಷ ಹಾಗೂ ದೇವದಾಸಿಯ ಮಗಳು ಪ.ಜಾತಿ ಅಥವಾ ಇತರೆ ಬೇರೆ ಜಾತಿಯ ಹುಡುಗನನ್ನು ವಿವಾಹವಾದರೆ ರೂ.5ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
• ಅರ್ಜಿದಾರರು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ https://swdservices.karnataka.gov.in/swincentive/DVDS/DVDSHome.aspx ಗೆ ಭೇಟಿ ನೀಡಿ.
• ಬಳಿಕ *ನೋಂದಣಿ* ಶೀರ್ಷಿಕೆ ಕೆಳಗೆ ನೀಡಲಾಗಿರುವ “ಇಲ್ಲಿ ಕ್ಲಿಕ್ ಮಾಡಿನೋಂದಣಿ” ಆಯ್ಕೆಯನ್ನು ಆರಿಸಿ.
• ನಂತರ ಆಧಾರ್ ಸಂಖ್ಯೆ ನಮೂದಿಸಿ ನೊಂದಣಿ ಮಾಡಿ.
• ಮುಂದುವರೆದಂತೆ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
• ಅರ್ಜಿ ಸಲ್ಲಿಸಿದ ಬಳಿಕ ಸಮಾಜ ಕಲ್ಯಾಣ ಇಲಾಖೆಯು ದಂಪತಿಗಳು ಒದಗಿಸಿದ ವಿವರಗಳನ್ನು ಪರಿಶೀಲಿಸಿ, ಸ್ಪಾಟ್ ವೆರಿಫಿಕೇಶನ್ ಮಾಡಿ. ನಂತರ, ಪ್ರೋತ್ಸಾಹಕ ಹಣವನ್ನು ದಂಪತಿಗಳ ಜಂಟಿ ಖಾತೆಗೆ ಜಮಾ ಮಾಡಲಿದೆ.
ಹೆಚ್ಚಿನ ಮಾಹಿತಿಗಾಗಿ: ಸಮಾಜ ಕಲ್ಯಾಣ ಇಲಾಖೆಯ ಕಮಿಷನರೇಟ್, 5 ನೇ ಮಹಡಿ, ಎಂಎಸ್ ಬಿಲ್ಡಿಂಗ್, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು – 560001, ವಿಳಾಸಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.