WhatsApp Channel Join Now
Telegram Group Join Now

Krishi Bhagya subsidy scheme 2024: ಮಳೆಯಾಶ್ರಿತ ರೈತರಿಗೆ ಸರ್ಕಾರದ ಬಂಪರ್ ಕೊಡುಗೆ

Krishi Bhagya subsidy scheme 2024: ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಕುಡಿಯುವ ನೀರು ಕೂಡ ಪರದಾಡುವಂತೆ ಆಗಿದೆ, ರೈತರಿಗೆ ಕೃಷಿ ಮಾಡಲು ಸರಿಯಾದ ಸಮಯಕ್ಕೆ ಕಾಲುವೆಗಳಲ್ಲಿ ನೀರು ಬಾರದ ಕಾರಣ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರವು ಮಳೆಯಾಶ್ರಿತ ರೈತರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆಯು ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು ಇದರ ಕುರಿತಂತೆ ಅರ್ಜಿ ಸಲ್ಲಿಸುವುದು ಹೇಗೆ, ಪ್ರಯೋಜನಗಳು ಯಾವುವು, ಈ ಯೋಜನೆಗೆ ಮಾನದಂಡಗಳು ಯಾವುವು, ಈ ಯೋಜನೆಯನ್ನು ರೈತರು ಹೇಗೆ ಉಪಯೋಗಿಸಬಹುದು ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ತಪ್ಪದೇ ಓದಿ ನೀವು ಮಳೆಯಾಶ್ರಿತ ರೈತರಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಲ್ಲಿ 2023-24 ನೇ ಸಾಲಿನಲ್ಲಿ ಜಿಲ್ಲೆಗಳಲ್ಲಿನ 106 ತಾಲೂಕುಗಳಲ್ಲಿ ಈ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯು ಅನುಷ್ಠಾನ ಗೊಳಿಸಲು ಸರ್ಕಾರವು ಮುಂದಾಗಿದೆ. ಅಂತರ್ಜಲ ವೃದ್ಧಿ ಹಾಗೂ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿ ಕೃಷಿ ಚಟುವಟಿಗೆಗಳನ್ನು ನೀಡಲು ಈ ಯೋಜನೆಯು ಅನುಕೂಲ ಮಾಡಿಕೊಟ್ಟಿದೆ. ರೈತರ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ, ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬೆಳೆಗಳಿಗೆ ಉಪಯೋಗಿಸಿಕೊಂಡು ಆದಾಯ ಗಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಒಟ್ಟು 106 ತಾಲೂಕುಗಳಲ್ಲಿ 16,062 ಕೃಷಿ ಹೊಂಡ ನಿರ್ಮಾಣ ಗುರಿಯನ್ನು ಸರ್ಕಾರವು ಹೊಂದಿದ್ದು , ಕೃಷಿಹೊಂಡದ ಸುತ್ತಲೂ ಬದು ನಿರ್ಮಾಣ ನೀರಿನಿಂದ ತಡೆಯಲು ಪಾನಿತಿನನ್ನು ವದಿಕೆ ಮಾಡಲಾಗುತ್ತದೆ. ಕೃಷಿ ಹೊಂಡದಿಂದ ನೀರನ್ನು ಎತ್ತಲು, ಡೀಸೆಲ್ ಪಂಪ್ಸೆಟ್ಟು ಬಳಸಲಾಗುತ್ತದೆ. ಬೆಳೆಗಳಿಗೆ ಹಾಯಿಸಲು ತುಂತುರು ನೀರಾವರಿ ಘಟಕ, ಕೃಷಿಹೊಂಡದ ಸುತ್ತಲೂ ಮುಳ್ಳು ತಂತಿ ಅಳವಡಿಸಲು ಕೂಡ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದ್ದಾರೆ.

Krishi Bhagya Subsidy Scheme
Krishi Bhagya Subsidy Scheme

Benefits of Krishi Bhagya Subsidy Scheme

ಕೃಷಿ ಭಾಗ್ಯ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ;

  • ಕೃಷಿ ಹೊಂಡ ಮಾಡಿ ಮಳೆ ನೀರನ್ನು ಸಂಗ್ರಹಿಸಿ ಬೇಸಿಗೆಗಾಲದಲ್ಲಿ ಬೆಳೆಗಳನ್ನು ಬೆಳೆಯಬಹುದು.
  • ರೈತರ ಆದಾಯವನ್ನು ಹೆಚ್ಚಿಸುತ್ತದೆ.
  • ನೀರು ಸೋರಿಕೆಯಾಗದಂತೆ ಪಾಲಿಥಿನ್ ಕವರ್‌ಗಳನ್ನು ನೀಡಲಾಗುತ್ತದೆ.
  • ಕೃಷಿ ಹೊಂಡದಿಂದ ನೀರನ್ನು ಮೇಲೆತ್ತಲು ಡೀಸೆಲ್ ಪಂಪ್ ಸೆಟ್‌ಗಳ ಪೂರೈಕೆ.
  • ಸರ್ಕಾರದ ವಿವಿಧ ಒಮ್ಮುಖಗಳ ಅಡಿಯಲ್ಲಿ ಲಘು ನೀರಾವರಿ (ಸ್ಪ್ರಿಂಕ್ಲರ್) ಘಟಕಗಳ ಅನುಷ್ಠಾನ.
  • ನೀರಿನ ವಿತರಣೆಯನ್ನು ಸಮರ್ಥವಾಗಿ ನಿರ್ವಹಿಸಲು ಕೃಷಿ ಹೊಂಡಗಳ ಸುತ್ತಲೂ ತಂತಿ ಬೇಲಿ ಘಟಕಗಳು.
  • ಕೃಷಿಭಾಗ್ಯ ಯೋಜನೆ ಅಡಿ ರೈತರಿಗೆ ದೊರೆಯುವ ಸಬ್ಸಿಡಿಗಳು
  • ಕೃಷಿ ಹೊಂಡಗಳ ನಿರ್ಮಾಣ
  • ಪಾಲಿಥಿನ್ ಹೊದಿಕೆ/ಪರಾಯ ಮಾದರಿಗಳು: ನೀರು ಸೋರಿಕೆಯನ್ನು ತಡೆಗಟ್ಟಲು ಗರಿಷ್ಠ 50,000 ರೂ.ಗಳ ಸಹಾಯಧನ.
  • ಡೀಸೆಲ್ ಪಂಪ್ ಸೆಟ್‌ಗಳು: ಪಂಪ್ ಸೆಟ್‌ಗಳನ್ನು ಖರೀದಿಸಲು ಸಬ್ಸಿಡಿ, ವಿವಿಧ ವರ್ಗಗಳಿಗೆ 50-90% ಸಹಾಯಧನ.
  • ಹನಿ ನೀರಾವರಿ ಮತ್ತು ಲಘು ನೀರಾವರಿಗೆ ಸಹಾಯವಾಗುವ ಸಾಮಗ್ರಿಗಳು ಸಾಮಗ್ರಿ ಖರೀದಿಸಲು ಶೇಕಡ 90ರಷ್ಟು ಸಹಾಯಧನ.
  • ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಕ್ಕೆ ಸಂಬಂಧಿಸಿದಂತೆ ಸಾವುಗಳು ಹೆಚ್ಚುತ್ತಿದ್ದು ರಕ್ಷಣೆಗಾಗಿ ಕೃಷಿಹೊಂಡದ ಸುತ್ತಮುತ್ತಲು ತಂತಿ ಬೇಲಿ‌ ಹಾಕಲಾಗುತ್ತದೆ.

Documents Required for Krishi Bhagya Scheme (KBS)

ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವದಾಖಲೆಗಳು ಈ ಕೆಳಗಿನಂತಿವೆ

  • ರೈತರ ಅರ್ಜಿ
  • FID
  • ಎಫ್ ಐ ಡಿ ಇಲ್ಲದಿದ್ದರೆ ಆಧಾರ್ ಕಾರ್ಡ್
  • ಪಹಣಿ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ರೈತರ ಭಾವಚಿತ್ರ

How to Apply for Krishi Bhagya Scheme

ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…? ಎಂಬುದನ್ನು ನೋಡುವುದಾದರೆ… ರೈತರು ತಮ್ಮ ಹತ್ತಿರವಿರುವ ಹೋಬಳಿ ಕೃಷಿ ಕೇಂದ್ರಕ್ಕೆ ಬೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವ ರೈತರ ಜಮೀನು ಮತ್ತು ಅರ್ಜಿಗಳನ್ನು ಪರಿಶೀಲಿಸಿ ನಂತರ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

More Govt Scheme UpdatesClick Here
KarnatakaHelp.inHome Page

Leave a Comment