ಎಫ್ಡಿಎ, ಎಸ್ಡಿಎ ಸೇರಿ ಇತರೆ ಹುದ್ದೆಗಳ ಭರ್ತಿ

ಹೊಸಪೇಟೆ: ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಯಮಿತ(ಡಿಸಿಸಿ ಬ್ಯಾಂಕ್‌)ದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಮೂಲ ಉಳಿಕೆ ವೃಂದದಡಿ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವ್ಯವಸ್ಥಾಪಕ/ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) 22 ಸ್ಥಾನಗಳು, ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) 28 ಸ್ಥಾನಗಳು, ಓರ್ವ ವಾಹನ ಚಾಲಕ, ಕಿರಿಯ ಸೇವಕರು 31 ಸ್ಥಾನಗಳಿಗೆ ಸೇರಿದಂತೆ ಒಟ್ಟು 82 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಯಾವುದೇ ಪದವಿ/ಪಿಯುಸಿ/ಎಸ್ಸೆಸ್ಸೆಲ್ಸಿ ಅರ್ಹತೆ ಹೊಂದಿರುವವರು ಬ್ಯಾಂಕಿನ ಅಧಿಕೃತ … More

ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಉದ್ಯೋಗ

ಯಾದಗಿರಿ: ಜಿಲ್ಲೆಯ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಬಂದಳ್ಳಿ ಏಕಲವ್ಯ ಮಾದರಿ ವಸತಿ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ. ಪಿಜಿಟಿ (ಇಂಗ್ಲೀಷ್, ಕನ್ನಡ, ಭೌತಶಾಸ್ತ್ರ , ರಸಾಯನಶಾಸ್ತ್ರ , ಜೀವಶಾಸ್ತ್ರ , ಗಣಿತ), ಟಿಜಿಟಿ (ಇಂಗ್ಲೀಷ್, ಕನ್ನಡ, ಗಣಿತ, ವಿಜ್ಞಾನ, ಹಿಂದಿ, ಸಂಗೀತ, ಕಂಪ್ಯೂಟರ್, ಸೈನ್ಸ್), ಪಿಇಟಿ (ಪುರುಷ) ಹುದ್ದೆಗಳನ್ನು 2026-27ನೇ ಶೈಕ್ಷಣಿಕ ಸಾಲಿನ ಒಪ್ಪಂದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ನೇರ … More

ICAIನಲ್ಲಿ ನಿರ್ದೇಶಕ, ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಿಶ್ವದ ಅತಿದೊಡ್ಡ ವೃತ್ತಿಪರ ಲೆಕ್ಕಪತ್ರ ಸಂಸ್ಥೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICAI)ದಲ್ಲಿ ನಿರ್ದೇಶಕ(ಕಾನೂನು) ಮತ್ತು ನಾನಾ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 109 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.15ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ಜಾಲತಾಣ https://icaisr.onlineregistrationform.org/ICAISR/ಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ವಿಭಾಗವಾರು … More

IRFCನಲ್ಲಿ ಸಹಾಯಕ, ಸ.ವ್ಯವಸ್ಥಾಪಕ ಹುದ್ದೆಗಳ ಭರ್ತಿ

ರೈಲ್ವೆ ಸಚಿವಾಲಯದಡಿ ಬರುವ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್‌ ಲಿಮಿಟೆಡ್(IRFC) ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಸಹಾಯಕ(ಎನ್‌ಇ5 ಲೆವೆಲ್‌) 16 ಸ್ಥಾನಗಳು, ಸಹಾಯಕ ವ್ಯವಸ್ಥಾಪಕ/ಫೈನಾನ್ಸ್‌(ಇ1 ಲೆವೆಲ್‌) 07 ಸ್ಥಾನಗಳು ಸೇರಿದಂತೆ ಒಟ್ಟು 23 ಅಭ್ಯರ್ಥಿಗಳನ್ನು ನೇಮಕ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 01ರವರೆಗೆ ಅವಕಾಶವಿದೆ. ಬಿ.ಕಾಂ ಜೊತೆಗೆ ಸಿಎ/ಸಿಎಂಎ, ಎಂಬಿಎ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗಾಗಿ ಐಆರ್‌ಎಫ್‌ಸಿ ಅಧಿಕೃತ ಜಾಲತಾಣ https://irfc.co.in/active-jobsಕ್ಕೆ ಭೇಟಿ ನೀಡಿ. ನೇಮಕಾತಿಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ … More

ವಾಯುಪಡೆ ಶಾಲೆಯಲ್ಲಿ ಹೆಲ್ಪರ್ಸ್ ಸೇರಿ ವಿವಿಧ ಹುದ್ದೆಗಳ ಭರ್ತಿ

ಬೆಂಗಳೂರು: ಜಾಲಹಳ್ಳಿ ವಾಯುಪಡೆ ಶಾಲೆಯಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 06 ಪಿಜಿಟಿ, 01 ಟಿಜಿಟಿ, 08 ಪಿಆರ್‌ಟಿ, 05 ಹೆಲ್ಪರ್ಸ್ ಹಾಗೂ 05 ಪಾರ್ಟ್ ಟೈಮ್ ಇನ್ಸ್ಟ್ರಕ್ಟರ್ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ನೇಮಕ ನಡೆಯಲಿದ್ದು, ಗುತ್ತಿಗೆ, ನಿಯಮಿತ, ಎಂಪೆನೆಲ್‌ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.11 ಕೊನೆಯದಿನವಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು AFSJAL ಅಧಿಕೃತ ಜಾಲತಾಣ https://www.afsjal.org/index.phpದಲ್ಲಿ ವಿದ್ಯಾರ್ಹತೆ ಕುರಿತು ನೀಡಲಾದ ಅಧಿಸೂಚನೆ ಪರಿಶೀಲಿಸಿ, ಅರ್ಜಿ ನಮೂನೆ ಡೌನ್ಲೋಡ್ … More

ಕೊಚ್ಚಿಯ NSRY, NAYನಲ್ಲಿ ಅಪ್ರೆಂಟಿಸ್‌ಶಿಪ್‌

ಕೊಚ್ಚಿಯ ನೌಕಾ ಹಡಗು ದುರಸ್ತಿ ಯಾರ್ಡ್(NSRY) ಹಾಗೂ ನಾವೆಲ್ ಏರ್ ಕ್ರಾಫ್ಟ್ ಯಾರ್ಡ್(NAY)ನಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಕಂಪ್ಯೂಟರ್ ಆಪರೇಷನ್ ಆಫ್ ಪ್ರೋಗ್ರಾಮಿಂಗ್, ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್, ಫಿಟ್ಟರ್ ಹಾಗೂ ಮೆಕ್ಯಾನಿಕ್ ಸೇರಿದಂತೆ ವಿವಿಧ ಟ್ರೇಡ್‌ಗಳಿಗೆ ಒಟ್ಟು 240 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಏ.03ರೊಳಗೆ ತಲುಪಿಸಬೇಕು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ: ಕಂಪ್ಯೂಟರ್ ಆಪರೇಷನ್ … More

ಖನಿಜ ಮತ್ತು ವಸ್ತು ತಂತ್ರಜ್ಞಾನ ಸಂಸ್ಥೆ(IMMT)ಯಲ್ಲಿ MTS ಹುದ್ದೆಗಳ ನೇಮಕಾತಿ

ಭುವನೇಶ್ವರಂ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯಡಿ ಬರುವ ಪ್ರಮುಖ ಸಂಶೋಧನಾ ಸಂಸ್ಥೆಯಾಗಿರುವ ಖನಿಜ ಮತ್ತು ವಸ್ತು ತಂತ್ರಜ್ಞಾನ ಸಂಸ್ಥೆ(IMMT)ಯು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 07 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಏ.21ರವರೆಗೆ ಅವಕಾಶವಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ 25 ವರ್ಷದೊಳಗಿನ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಐಎಂಎಂಟಿ ಅಧಿಕೃತ ಜಾಲತಾಣ https://www.immt.res.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: IMMT ಅಧಿಕೃತ … More

‘ಬ್ಯಾಂಕ್ ನೋಟ್ ಪೇಪರ್ ಮಿಲ್’ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿ

ಮೈಸೂರು: ಇಲ್ಲಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(BNPMIPL) ವಿವಿಧ ವೃಂದದ ಸಹಾಯಕ ವ್ಯವಸ್ಥಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಏ.11ರವರೆಗೆ ಅವಕಾಶವಿದೆ. ಸಹಾಯಕ ವ್ಯವಸ್ಥಾಪಕ(ಫೈನಾನ್ಸ್ & ಅಕೌಂಟ್ಸ್) 02 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ(ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್) 02 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ(ಸಿವಿಲ್) 02 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಅಭ್ಯರ್ಥಿಗಳಿಗೆ ಮಾಸಿಕ ₹52,000 ಸಂಬಳ ಸಿಗಲಿದೆ. ಅಧಿಕೃತ ವೆಬ್‌ಸೈಟ್‌ https://bnpmindia.com/ನಲ್ಲಿ ಲಭ್ಯವಿರುವ ವಿಸ್ತೃತ ಅಧಸೂಚನೆ ಓದಿ, ಅಲ್ಲಿಯೇ ಅರ್ಜಿ ನಮೂನೆ … More

RDPR: ಓಂಬುಡ್ಸ್‌ಪರ್ಸನ್ಸ್‌ ಹುದ್ದೆಗಳ ಭರ್ತಿ

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಸಂಬಂಧ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ವಿವಿಧ ಜಿಲ್ಲೆಗಳಿಗೆ ಓಂಬುಡ್ಸ್‌ಪರ್ಸನ್ಸ್‌ ನೇಮಕಾತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದು ಅರೆಕಾಲಿಕ ಹುದ್ದೆಯಾಗಿದ್ದು, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಜಾಲತಾಣ(rdpr.karnataka.gov.in)ದ ಮೂಲಕ ಅರ್ಜಿ ನಮೂನೆ … More

ತುಮಕೂರು ಮಹಾನಗರ ಪಾಲಿಕೆ: ಪೌರ ಕಾರ್ಮಿಕರ ನೇಮಕಾತಿ

ತುಮಕೂರು: ಜಿಲ್ಲೆಯ ಮಹಾನಗರಪಾಲಿಕೆ ಸೇರಿದಂತೆ ತಿಪಟೂರು, ಶಿರಾ ನಗರಸಭೆಗಳಿಗೆ ಪೌರಕಾರ್ಮಿಕ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಏ.09ರ ಸಂಜೆ 5 ಗಂಟೆಯವರೆಗೆ ಕಾಲಾವಕಾಶವಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಆಯಾ ಸಂಬಂಧಿತ ನಗರಸಭೆ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಜೊತೆಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: • ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ … More